ವಧು

ಹುಟ್ಟಿದಾಗ ಅಳುತಲೇ
ಹುಟ್ಟಿದ ಅವಳ ಬಿಕ್ಕುಗಳು
ಸಾವಿನಲ್ಲೇ ಕೊನೆಗೊಂಡಿದ್ದವು.

ಕುಣಿದು ಕುಪ್ಪಳಿಸಿ,
ಹಲವು ಹದಿನೆಂಟು
ಆಟಗಳ ಮಧ್ಯ
ಮೈ ಮರೆತಿರುವಾಗಲೇ
ವಧು ಪರೀಕ್ಷೆಗೆ
ಮೈ ಒಡ್ಡಬೇಕಾಯಿತು.

ಎನೂ ಅರಿಯದ ಮನಸ್ಸು
ರಂಗು ರಂಗಿನ ಕನಸುಗಳ
ಹಗಲಲ್ಲೇ ಹೆಣೆಯುತ್ತಿತ್ತು.

ಮನಸ್ಸು ಗರಿಬಿಚ್ಚಿ
ರೆಕ್ಕ ಪುಕ್ಕ ಹುಟ್ಟಿಕೊಂಡು
ಆಗಸದ ತುಂಬೆಲ್ಲ
ಹಾರಾಡುತ್ತಿತ್ತು ಹಕ್ಕಿಯಾಗಿ
ಕನಸುಗಳ ಮಹಲುಗಳು
ಸ್ವರ್ಗದ ಮೆಟ್ಟಿಲನ್ನು
ಮುಟ್ಟುತ್ತಿದ್ದವು.

ನೂರೆಂಟು ಕನಸುಗಳ
ಹೊತ್ತು ನೂತನ ವಧುವಾಗಿ
ಗಂಡನ ಮನೆ ಸೇರಿದಳು.

ವಧುವಿನ ಅರಿಶಿನ
ಆರಿ ಹೋಗುವ ಮುನ್ನ
ಅಳುತಲೇ ಹುಟ್ಟಿದ
ಅವಳ ಬಿಕ್ಕುಗಳು
ಸಾವಿನಲ್ಲಿ ಕೊನೆಗೊಂಡಿದ್ದವು.

ಅವಳಿಗರಿವಿಲ್ಲದಂತೆಯೇ
ಅವಳು ಪತ್ರಿಕೆಗಳ
ಸಾವಿನ ಕಾಲಂಗಳಿಗೆ
ಸುದ್ದಿಯಾಗಿದ್ದಳು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜಾರಿದ ದಾರಿಯನರಿಯದೆ ಭಾರಿ ಹುಡುಕಿದೊಡೇನು?
Next post ಗೇಮ್ಸ್

ಸಣ್ಣ ಕತೆ

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

cheap jordans|wholesale air max|wholesale jordans|wholesale jewelry|wholesale jerseys